Monday, May 9, 2011

ಗೋಡೆ ಪತ್ರಿಕೆ ಲೇಖನ ಪ್ರಜಾವಾಣಿ ಶಿಕ್ಷಣ ಪತ್ರಿಕೆ2/5/2011



ಶಾಲಾ ಗೋಡೆಗೂ ಜೀವಂತಿಕೆ... ಪರಮೇಶ್ವರಯ್ಯ ಸೊಪ್ಪಿಮಠ

ಪುಟ್ಟ ಬೇದ್ರೆ ಸುಮಂತನ ಜೊತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದೆ.

‘ಅಂಕಲ್ ನಮ್ಮ ಶಾಲೆಯಲ್ಲಿ ‘ಪ್ರತಿಭೆ’ ಅನ್ನೊ ಗೋಡೆ ಪತ್ರಿಕೆ ಪ್ರಾರಂಭಿಸಿದ್ದೀವಿ’ ಎಂದ
ಅವನು ಹೇಳುವ ಉತ್ಸಾಹ ಕಂಡು ಅದರ ಬಗ್ಗೆ ನನಗೂ ಸ್ವಲ್ಪ ಹೇಳೋ ಎಂದೆ. ‘ಈ ಗೋಡೆ
ಪತ್ರಿಕೆಯನ್ನು ನೊಟೀಸ್ ಬೋರ್ಡ್‌ನ ಪಕ್ಕದ ಒಂದು ಬೋರ್ಡಿನಲ್ಲಿ ಪ್ರಕಟಿಸಿದ್ದಾರೆ.
ಅದು ಎಲ್ಲಾ ಮಕ್ಕಳಿಗೂ ಓದಲು ಸಿಗುವಂತಿದೆ. ಅದಕ್ಕೆ ನಮ್ಮ ಮುಖ್ಯಗುರುಗಳು ಮುಖ್ಯ
ಸಂಪಾದಕರು, ಕನ್ನಡ ಟೀಚರ್ ಸಹ ಸಂಪಾದಕರು, ಮೀನಾ ತಂಡದ ನಾಯಕಿ ಸಂಪಾದಕಿಯಾಗಿ ಆಯ್ಕೆ
ಯಾಗಿದ್ದಾರೆ’ ಎಂದು ವಿವರಿಸಿದ.

ಸರಿ ಅವರೆಲ್ಲಾ ಏನು ಮಾಡ್ತಾರೆ ?
‘ಪ್ರತಿ ತರಗತಿ ಶಿಕ್ಷಕರು ಮತ್ತು ನಾಯಕರು ತಮ್ಮ ತರಗತಿ ವಿದ್ಯಾರ್ಥಿಗಳು ಬರೆದ ಕವನ,
ಕಥೆ, ಚುಟುಕು, ವ್ಯಂಗ್ಯಚಿತ್ರ, ಜೋಕ್, ರಸಪ್ರಶ್ನೆ, ಚಿತ್ರ, ಲೇಖನಗಳನ್ನು
ಸಂಗ್ರಹಿಸಿ ಸಂಪಾದಕಿಗೆ ಕೊಡಬೇಕು. ಸಂಪಾದಕಿಯು ಉಳಿದ ಸಂಪಾದಕ ಮಂಡಳಿ ಜೊತೆ ಚರ್ಚೆ
ಮಾಡಿ ಉತ್ತಮವಾದವನ್ನು ಆಯ್ಕೆ ಮಾಡುತ್ತಾರೆ. ಅವನ್ನು ಅಚ್ಚುಕಟ್ಟಾಗಿ ಡ್ರಾಯಿಂಗ್
ಹಾಳೆಯ ಮೇಲೆ ದುಂಡಾಗಿ ಬರೆವ ವಿದ್ಯಾರ್ಥಿಗಳಿಂದ ಬರೆಸಿ, ಗೋಡೆ ಬರಹದ
‘ಪ್ರತಿಭೆ’ಯಲ್ಲಿ ಪ್ರಕಟಿಸುತ್ತಾರೆ. ಈಗ ಸದ್ಯಕ್ಕೆ ತಿಂಗಳಿಗೆ ಒಂದು ಅಂತ
ನಿರ್ಧರಿಸಲಾಗಿದೆ. ಮುಂದೆ ಹೆಚ್ಚು ಸಂಗ್ರಹವಾದರೆ ಎರಡು ಬಾರಿಯೂ ಪ್ರಕಟಿಸಲಾಗುತ್ತದೆ’
ಎಂದ.

‘ಬಹಳ ಚೆನ್ನಾಗಿದೆ ಕಣೋ’ ಎಂದೆ.

‘ಅಷ್ಟೆ ಅಲ್ಲ ಅಂಕಲ್, ಬಹಳ ಉತ್ತಮವೆನಿಸಿದ ಬರಹಗಳನ್ನು ಅವರೆ ರಾಜ್ಯ ಮಟ್ಟದ

ಪತ್ರಿಕೆಗಳಿಗೆ ಕಳಿಸಿಕೊಡುತ್ತಾರೆ. ಜೊತೆಗೆ ಶಾಲಾ ವಾರ್ಷಿಕ ಸಂಚಿಕೆಗೂ

ಬಳಸಿಕೊಳ್ಳುತ್ತಾರೆ. ಇದರಿಂದ ನಮ್ಮ ಶಾಲೆಯಲ್ಲಿ ಒಂದು ರೀತಿ ಸ್ಪರ್ಧೆ ಏರ್ಪಟ್ಟಿದೆ
ನಾನೂ ಬರೆಯಬೇಕು ಎಂಬ ಉತ್ಸಾಹ ಎಲ್ಲರಲ್ಲೂ ಬಂದಿದೆ. ಅದಕ್ಕೆ ಹೆಚ್ಚು ಹೆಚ್ಚು ಓದಲು

ಪ್ರಾರಂಭಿಸಿದ್ದಾರೆ’ ಎಂದು ಮಾತು ನಿಲ್ಲಿಸಿದ. ಆದರೆ ನನ್ನ ತಲೆಯಲ್ಲಿ ಬರೀ ಅವನ

ಮಾತುಗಳೇ ಸುಳಿಯುತ್ತಿದ್ದವು
ಹೌದು ಈ ಪುಟಾಣಿ ಹೇಳುವಂತೆ ಗೋಡೆ ಪತ್ರಿಕೆಗಳು ಮಕ್ಕಳ ಕಲಿಕಾ ಪ್ರಕ್ರಿಯೆಗೆ ನೆರವು

ನೀಡುವುದಲ್ಲದೆ, ಆ ಗೋಡೆಗಳಿಗೆ ಜೀವಂತಿಕೆಯನ್ನು ತಂದು ಕೊಡುತ್ತವೆ.

ಇಂತಹ ಚಟುವಟಿಕೆಗಳು ನಡೆಯದಿದ್ದರೆ; ನಮ್ಮ ಶಾಲೆಗಳು ಬರೀ ಪಠ್ಯ ಪುಸ್ತಕ,

ಪರೀಕ್ಷೆಗಳಿಗೆ ಸೀಮಿತವಾಗಿ, ನಿಜ ಜೀವನದ ಪರೀಕ್ಷೆಗಳನ್ನು ಎದುರಿಸಲು ಅಸಮರ್ಥವಾಗಿ

ಶಿಕ್ಷಣದ ಅರ್ಥವನ್ನೇ ಕುಬ್ಜಗೊಳಿಸಿಬಿಡುತ್ತವೆ.
ಹಾಗಾಗಿ ಪ್ರಸ್ತುತದಿನದಲ್ಲಿ ಮಕ್ಕಳ ಕಲಿಕಾ ವಿಧಾನ ಮತ್ತು ತರಗತಿಯಲ್ಲಿನ ಬೋಧನಾ

ವಿಧಾನಗಳು ಹೊಸ ಹೊಸ ಹಾದಿಯನ್ನು ತುಳಿಯುವುದು ಅವಶ್ಯವಾಗಿದೆ. ಅಂತಹ ನವನೂತನ

ಹಾದಿಗಳಲ್ಲಿ ಗೋಡೆ ಪತ್ರಿಕೆಗೂ ಮಹತ್ವದ ಸ್ಥಾನವಿದೆ.
ವಿದ್ಯಾರ್ಥಿಗಳು ತಾವು ಓದಿದ-ತಿಳಿದ-ಕೇಳಿದ ಮಾಹಿತಿಯನ್ನು ಅಭಿವ್ಯಕ್ತಿಸಲು, ಭಾಷೆಯ

ಮೇಲಿನ ಹಿಡಿತವನ್ನು ಗಟ್ಟಿಗೊಳಿಸಲು, ಕಂಡುಕೊಂಡ ಜ್ಞಾನವನ್ನು ಪ್ರದರ್ಶಿಸಲು,

ಶಾಲೆಯಲ್ಲಿ ಕಲಿತ ಅಂಶವನ್ನು ಬದುಕಿನಲ್ಲಿ ಅನ್ವಯಮಾಡಿಕೊಳ್ಳುವುದರ ಬಗ್ಗೆ ಚರ್ಚಿಸಲು

ಗೋಡೆ ಪತ್ರಿಕೆ ಅತ್ಯುತ್ತಮ ವೇದಿಕೆಯಾಗಿದೆ. ಮಕ್ಕಳಿಗೆ ತಾವು ಬರೆದಿರುವುದು

ಪ್ರಕಟವಾಗಿರುವುದನ್ನು ನೋಡುವಾಗ ಆಗುವ ಸಂತಸ ಹೇಳತೀರದು. ಅದು ಅವರಲ್ಲಿ ನೂರುಪಟ್ಟು

ಆಸಕ್ತಿಯನ್ನು ಪ್ರೇರೇಪಿಸುತ್ತದೆ. ಆರಂಭದಲ್ಲಿ ಅದು ನಿರೀಕ್ಷಿತ ಮಟ್ಟ

ಮುಟ್ಟುವುದಿಲ್ಲ. }
ಅದಕ್ಕೆ ಶಿಕ್ಷಕರು ನಿರಾಸೆ ತಾಳದೆ, ತಾಳ್ಮೆುಂದ ಮುಂದುವರೆಯಬೇಕು. ಮೊದ ಮೊದಲು ಕೆಲವೇ

ಬುದ್ಧಿವಂತ ಮಕ್ಕಳು ಬರೆದರೆ ಅದನ್ನು ಪ್ರಕಟಿಸುತ್ತಾ, ಉಳಿದ ಮಕ್ಕಳ ಸಾಮರ್ಥ್ಯ

ಗುರುತಿಸಿ ಪ್ರೋತ್ಸಾಹಿಸಿದಲ್ಲಿ, ಅವರೂ ಬವರೆಯುವ ಸಾಮರ್ಥ್ಯ ಪಡೆಯುತ್ತಾರೆ. ನಮ್ಮ

ಶಿಕ್ಷಕರು ಮೊದಲು ಗಮನಿಸಬೇಕಾದ ಅಂಶವೆಂದರೆ ಬರೆಯುವ ಸಾಮರ್ಥ್ಯ ಎಲ್ಲರಲ್ಲೆ ಒಂದೇ

ತೆರನಾಗಿರುವುದಿಲ್ಲ. ಅದರ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.

ಮಕ್ಕಳಲ್ಲಿ ಬರೆಯುವ ಆಸಕ್ತಿ ಜಾಗೃತವಾದರೆ, ಮುಂದೆ ಶಿಕ್ಷಕರು ಶ್ರಮ ಪಡುವ ಅಗತ್ಯವೇ

ಬೀಳುವುದಿಲ್ಲ.

ಈ ತರಹದ ಚಟುವಟಿಕೆಗಳಿಂದ ಮಕ್ಕಳಲ್ಲಿ ಹೊಸದನ್ನು ಹುಡುಕುವ ಮನೋಭಾವ, ಇತರೆ

ಪುಸ್ತಕಗಳನ್ನು ಓದುವ ಹವ್ಯಾಸ, ಮಹತ್ವದ ಘಟನೆಗಳನ್ನು ಗುರುತಿಸುವಿಕೆ...ಇತ್ಯಾದಿ

ಅನೇಕ ಕೌಶಲ್ಯಗಳು ವೃದ್ಧಿಸುತ್ತವೆ.
ಶಿಕ್ಷಕರು ಗೋಡೆ ಬರಹದಲ್ಲಿ ಪ್ರಕಟವಾದ ಉತ್ತಮ ಬರವಣಿಗೆಗಳನ್ನು ಗುರುತಿಸಿ,

ಸಂಗ್ರಹಿಸಿ ಪ್ರತಿವರ್ಷ ಒಂದು ಮಕ್ಕಳ ಪುಸ್ತಕವನ್ನು ದಾನಿಗಳ ಸಹಾಯದಿಂದ ಪ್ರಕಟಿಸಿದರೆ

ಅದರಿಂದಾಗುವ ಲಾಭ ಲೆಕ್ಕಕ್ಕೆ ಸಿಗದು. ಇದನ್ನು ಮನಗಂಡ ಶಿಕ್ಷಣ ಇಲಾಖೆ ಎಲ್ಲಾ

ಶಾಲೆಗಳಲ್ಲಿ ಮಕ್ಕಳಿಂದ ಗೋಡೆ ಬರಹ ರಚಿಸಿ ಪ್ರದರ್ಶಿಸಬೇಕು ಎಂದು ಆದೇಶಿಸಿರುವುದು

ಉತ್ತಮ ಬೆಳವಣಿಗೆ
ಚಿಣ್ಣರ ಚೇತನ..

ಸರ್ವ ಶಿಕ್ಷಣ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿ ಅದಮ್ಯ ಚೇತನ ಸಂಸ್ಥೆಯ ಸಹಯೋಗದೊಂದಿಗೆ

ರಾಜ್ಯದ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಚಿಣ್ಣರ ಚೇತನ ಮಾಸಿಕ ಗೋಡೆ

ಪತ್ರಿಕೆಯನ್ನು ವಿತರಿಸಲಾಗುತ್ತಿದೆ. 2009ರ ಆಗಸ್ಟ್ ತಿಂಗಳಿಂದ ರಚಿಸಲ್ಪಡುತ್ತಿರುವ

ಈ ಪತ್ರಿಕೆ ಮಕ್ಕಳ ಹಾಗೂ ಶಿಕ್ಷಕರ ಮನಸ್ಸನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ
ಈ ಚೇತನದಲ್ಲಿ ಕನ್ನಡ ಭಾಷೆ, ಸಾಹಿತ್ಯ, ವೈಜ್ಞಾನಿಕ ಅಂಶಗಳು, ವಿನೋದ ಗಣಿತದ

ಚಟುವಟಿಕೆಗಳು, ಆದರ್ಶ ವ್ಯಕ್ತಿಗಳ ಪರಿಚಯ, ಸಾಧಕರ ಸಾಧನೆಗಳು ಕುರಿತಾದ ಅಂಶಗಳು

ತುಂಬಿರುತ್ತವೆ. ಜೊತೆಗೆ ಇದು ನಾಲ್ಕು ಬಣ್ಣಗಳಲ್ಲಿ, ದೊಡ್ಡ ದೊಡ್ಡ ಅಕ್ಷರಗಳಲ್ಲಿ

ಬರುತ್ತಿರುವುದರಿಂದ ಮಕ್ಕಳ ಮನಸ್ಸಿಗೆ ಮುದನೀಡುತ್ತಿದೆ. ಸರಳವಾಗಿ ಅರ್ಥವಾಗುವಂತಹ

ಭಾಷೆ ಬಳಸಿದ್ದು, ವಿವಿಧ ರೀತಿಯ ಚೌಕಟ್ಟಿನಲ್ಲಿ, ಬೇರೆ ಬೇರೆ ಚಿತ್ರಗಳನ್ನು ಬಳಸಿ

ಮುದ್ರಿಸುವುದರಿಂದ ಕಣ್ಣಗೆ ಆನಂದ ನೀಡುತ್ತದೆ.
ಶಿಕ್ಷಕರ ಮತ್ತು ಮಕ್ಕಳ ಬರಹಗಳಿಗೂ ಅವಕಾಶ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.

ರಾಜ್ಯದ ಮೂಲೆ ಮೂಲೆಗಳಿಂದ ಈ ಗೋಡೆ ಬರಹಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ.
ಚಿಣ್ಣರ ಚೇತನ ಇನ್ನು ಹೆಚ್ಚು ಮಕ್ಕಳನ್ನು ತಲುಪಬೇಕಾದರೆ ಪ್ರತಿ ಶಾಲೆಯಲ್ಲಿ

ಅದಕ್ಕಾಗಿ ಸೂಕ್ತ ಗೋಡೆ/ಬೋರ್ಡ್‌ನ್ನು ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಿ

ಪ್ರದರ್ಶನಕ್ಕೆ

ಈ ಚೇತನದಲ್ಲಿ ಕನ್ನಡ ಭಾಷೆ, ಸಾಹಿತ್ಯ, ವೈಜ್ಞಾನಿಕ ಅಂಶಗಳು, ವಿನೋದ ಗಣಿತದ

ಚಟುವಟಿಕೆಗಳು, ಆದರ್ಶ ವ್ಯಕ್ತಿಗಳ ಪರಿಚಯ, ಸಾಧಕರ ಸಾಧನೆಗಳು ಕುರಿತಾದ ಅಂಶಗಳು

ತುಂಬಿರುತ್ತವೆ. ಜೊತೆಗೆ ಇದು ನಾಲ್ಕು ಬಣ್ಣಗಳಲ್ಲಿ, ದೊಡ್ಡ ದೊಡ್ಡ ಅಕ್ಷರಗಳಲ್ಲಿ

ಬರುತ್ತಿರುವುದರಿಂದ ಮಕ್ಕಳ ಮನಸ್ಸಿಗೆ ಮುದನೀಡುತ್ತಿದೆ. ಸರಳವಾಗಿ ಅರ್ಥವಾಗುವಂತಹ

ಭಾಷೆ ಬಳಸಿದ್ದು, ವಿವಿಧ ರೀತಿಯ ಚೌಕಟ್ಟಿನಲ್ಲಿ, ಬೇರೆ ಬೇರೆ ಚಿತ್ರಗಳನ್ನು ಬಳಸಿ

ಮುದ್ರಿಸುವುದರಿಂದ ಕಣ್ಣಗೆ ಆನಂದ ನೀಡುತ್ತದೆ.
ಶಿಕ್ಷಕರ ಮತ್ತು ಮಕ್ಕಳ ಬರಹಗಳಿಗೂ ಅವಕಾಶ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.

ರಾಜ್ಯದ ಮೂಲೆ ಮೂಲೆಗಳಿಂದ ಈ ಗೋಡೆ ಬರಹಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ.
ಚಿಣ್ಣರ ಚೇತನ ಇನ್ನು ಹೆಚ್ಚು ಮಕ್ಕಳನ್ನು ತಲುಪಬೇಕಾದರೆ ಪ್ರತಿ ಶಾಲೆಯಲ್ಲಿ

ಅದಕ್ಕಾಗಿ ಸೂಕ್ತ ಗೋಡೆ/ಬೋರ್ಡ್‌ನ್ನು ಕಡಿಮೆ ವೆಚ್ಚದಲ್ಲಿ ಸಿದ್ಧಪಡಿಸಿ

ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಸಾಧ್ಯವಾದರೆ ಒಂದೊಂದು ದಿನ ಒಂದೊಂದು ತರಗತಿಯಲ್ಲಿ

ಪ್ರದರ್ಶಿಸಬೇಕು. ನಂತರ ಎಲ್ಲಾ ಮಕ್ಕಳಿಗೂ ಸುಲಭವಾಗಿ ಓದಲು ಕ್ಯಗೆಟುಕುವಂತೆ ಸಾಮಾನ್ಯ

ಸ್ಥಳದಲ್ಲಿ ಪ್ರದರ್ಶಿಸಬೇಕು.
ಹೊಸ ಪತ್ರಿಕೆ ಬರುವವರಿಗೂ ಅದು ಬೋರ್ಡಿನಲ್ಲಿ ಪ್ರದರ್ಶನವಾಗುತ್ತಿರಬೇಕು.

ಸಂದರ್ಶಿಸುವ ಅಧಿಕಾರಿಗಳು ಆ ಕುರಿತು ಜಾಗೃತಿ ಮೂಡಿಸಬೇಕು. ಆಗ ಅದು ನಿರೀಕ್ಷಿತ ಫಲ

ಕೊಡುತ್ತದೆ.(ಗಮನಿಸಿ: http://www.schooleducation.kar.nic.in/)

No comments:

Post a Comment