Monday, October 21, 2013
Sunday, September 29, 2013
Monday, September 2, 2013
ಶಿಕ್ಷಕರನ್ನು ಗೌರವಿಸೋಣ ಬನ್ನಿ--ನನ್ನ ಲೇಖನ ಈ ದಿನದ(2/9/13) ಪ್ರಜಾವಾಣಿಯಲ್ಲಿ-ಗಮನಿಸಿ
ಗುರು ಗೌರವಿಸೋಣ ಬನ್ನಿ
1957ರಲ್ಲಿ ರಷ್ಯವು ಅಂತರಿಕ್ಷ ನೌಕೆಯನ್ನು ಉಡಾಯಿಸಿದಾಗ, ಅಮೆರಿಕದ ನಾಗರಿಕರು ತಮ್ಮ ಶಿಕ್ಷಣ ಇಲಾಖೆಯನ್ನು ಚುರುಕುಗೊಳಿಸುವಲ್ಲಿ ಸರ್ಕಾರದ ವೈಫಲ್ಯವನ್ನು ತೀವ್ರವಾಗಿ ಖಂಡಿಸಿದರು. ಇದರಿಂದ ಎಚ್ಚೆತ್ತ ಸರ್ಕಾರ, ವಿಜ್ಞಾನ ಶಿಕ್ಷಣಕ್ಕೆ ವಿಶೇಷ ಪ್ರಾಶಸ್ತ್ಯ ನೀಡಿ ಪ್ರತಿ ಶಾಲಾ- ಕಾಲೇಜನ್ನೂ ವಿಜ್ಞಾನದ ಉಪಕರಣಗಳಿಂದ ಸಜ್ಜುಗೊಳಿಸಿತು. ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿತು.
ಇದರ ಪರಿಣಾಮವಾಗಿ ಅಮೆರಿಕವು ರಷ್ಯವನ್ನು ಹಿಂದಿಕ್ಕಿ ಚಂದ್ರನ ಮೇಲೆ ಪಾದಾರ್ಪಣೆ ಮಾಡಲು ಸಾಧ್ಯವಾಯಿತು. ನಮ್ಮ ದೇಶಕ್ಕಿಂತ ಅಮೆರಿಕನ್ನರಲ್ಲಿ ಇರುವ ಪ್ರಜ್ಞಾವಂತಿಕೆ ಮತ್ತು ಶಿಕ್ಷಣಕ್ಕೆ ಅವರು ನೀಡುವ ಆದ್ಯತೆಯನ್ನು ಈ ಉದಾಹರಣೆ ತಿಳಿಸುತ್ತದೆ. ಶಿಕ್ಷಣವು ವ್ಯಕ್ತಿ ಮತ್ತು ಶಕ್ತಿಯ ಪ್ರತೀಕ.
ದೇಶದ ಸಮಸ್ಯೆಗಳಿಗೆ ಈ ಕ್ಷೇತ್ರದಿಂದ ಮಾತ್ರ ಪರಿಹಾರ ಸಾಧ್ಯ. ಹೀಗಾಗಿ, ದೇಶ ಕಂಡ ಮೇಧಾವಿ, ಶಿಕ್ಷಕರ ಶಿಕ್ಷಕ ಡಾ. ಎಸ್.ರಾಧಾಕೃಷ್ಣನ್ ಅವರ 125ನೇ ಜನ್ಮದಿನದ ಈ ಸಂದರ್ಭದಲ್ಲಿ, ಉತ್ತಮ ಭವಿಷ್ಯದ ನಿರ್ಮಾತೃಗಳಾದ ಶಿಕ್ಷಕರನ್ನು ಗೌರವಿಸಲು ಇದು ಸುಸಮಯ.
`ನಮ್ಮ ದೇಶದಲ್ಲಿ ಒಬ್ಬ ಚಕ್ರವರ್ತಿ ಇದ್ದ. ಆತ ರಕ್ತಪಾತದಿಂದ ಕೂಡಿದ ಭಾರಿ ಯುದ್ಧದ ಮೂಲಕ ಸಾಮ್ರೋಜ್ಯವೊಂದನ್ನು ಗೆದ್ದ. ನಂತರ ವಿರಕ್ತನಾಗಿ ಸಮರವನ್ನು ತ್ಯಜಿಸಿ ಸನ್ಯಾಸಿಯಾದ. ಅಹಿಂಸೆಯ ಮಹಾನ್ ಬೋಧಕನಾದ. ಅಂತೆಯೇ ಶಕ್ತಿ, ಸಾಹಸಗಳಿಂದ ಕ್ರಾಂತಿಯ ಮೂಲಕ ಅಧಿಕಾರಕ್ಕೆ ಏರಿರುವ ನೀವು, ಮುಂದೆ ಏನಾಗುತ್ತೀರೋ ಯಾರು ಬಲ್ಲರು?'- 1949ರ ಅವಧಿಯಲ್ಲಿ ಪ್ರಪಂಚದ ಅತ್ಯಂತ ಶಕ್ತಿವಂತರು ಎನಿಸಿಕೊಂಡ ನಾಲ್ವರಲ್ಲಿ ಒಬ್ಬರಾದ, ತನ್ನ ಮಾತೇ ಅಂತಿಮ, ತಾನು ಮಾಡಿದ್ದೇ ಸರಿ ಎನ್ನುತ್ತಾ ಅಧಿಕಾರ ನಡೆಸಿದ ರಷ್ಯದ ಸರ್ವಾಧಿಕಾರಿ ಮಾರ್ಷಲ್ ಸ್ಟಾಲಿನ್ ಅವರನ್ನು ಉದ್ದೇಶಿಸಿ ಈ ಮಾತು ಹೇಳಿದ ಧೈರ್ಯಶಾಲಿ ಮತ್ತಾರೂ ಅಲ್ಲ, ಡಾ. ಸರ್ವಪಲ್ಲಿ ರಾಧಾಕೃಷ್ಣನ್.
ವಿಶ್ವವಿಖ್ಯಾತಿ, ಸ್ಥಾನಮಾನ, ಅಧಿಕಾರ, ಗೌರವ, ಮರ್ಯಾದೆ ಏನೆಲ್ಲಾ ಇದ್ದರೂ ಒಂದು ದಿನವೂ ಅಹಮಿಕೆಯ ದಾಸರಾಗದೆ, ದಾಸವರೇಣ್ಯರಂತೆ ಸರಳ, ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದವರು ಅವರು. `ಈಗ ಏನಾಗಿದ್ದರೂ, ಮೊದಲು ನಾನು ಶಿಕ್ಷಕ' ಎನ್ನುತ್ತಾ, ವೃತ್ತಿಯೆಡೆಗೆ ತಮಗಿದ್ದ ಅದಮ್ಯ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸಿದ್ದರು. `ಜನ್ಮದಿನ ನನ್ನದೇಕೆ? ಆಚರಿಸುವುದಾದರೆ ಅದು ಶಿಕ್ಷಕರ ದಿನ ಆಗಬಾರದೇಕೆ?' ಎಂದು ಹೇಳಿ, ಶಿಕ್ಷಕರನ್ನು ಸ್ಮರಿಸಲು ನಮಗೆಲ್ಲ ಒಂದು ವೇದಿಕೆಯನ್ನು ಅವರು ನಿರ್ಮಿಸಿಕೊಟ್ಟರು.
ಕನ್ನಡದ ಮೇರು ಸಾಹಿತಿ ವಿ.ಸೀ. ಅವರು ರಾಧಾಕೃಷ್ಣನ್ ಕುರಿತು `ವಿದ್ಯಾರ್ಥಿಗಳಿಗೆ ಅವರ ತರಗತಿಗಳೆಂದರೆ ಹಬ್ಬ. ವಿದ್ಯಾರ್ಥಿಗಳನ್ನು ಬೈದು-ಗದರಿಸಿ, ದರ್ಪ ತೋರುವ ಮನೋಭಾವ ಅವರದಲ್ಲ. ಅವರು ಹೇಳಿದ್ದನ್ನು ಕೇಳಿ, ಬರೆಸಿದ್ದನ್ನು ಬರೆದವರು ಎಷ್ಟು ಉನ್ನತ ತರಗತಿಯಾದರೂ ಸರಿ ತೇರ್ಗಡೆ ಹೊಂದಬಹುದಾಗಿತ್ತು. ಅವರು ಬೋಧಿಸುವ ವಿಷಯ ಮನದಟ್ಟಾಗುತ್ತಿತ್ತು. ಅವರ ವಾಗ್ಮಯತೆ, ವಿಲಾಸ, ಸ್ಫ್ಪುಟತೆ ಸ್ಮರಣೀಯ. ಅವರದು ನಿಸ್ಸಂಶಯವಾದ ತೀರ್ಮಾನ.
ವಿದ್ಯಾಬೋಧನೆಯ ಚಾತುರಯವಲ್ಲದೆ ಮಾನವತೆ- ಔದಾರಯ- ವಾತ್ಸಲ್ಯವೂ ಅವರ ಜೊತೆಗಿದ್ದವು' ಎಂದು ಹೇಳಿರುವ ಮಾತುಗಳು ನಮ್ಮ ಶಿಕ್ಷಕರಿಗೆ ಸ್ಫೂರ್ತಿದಾಯಕವಾಗಿವೆ. ದೆ ಗುರು-ಶಿಷ್ಯರ ನಡುವೆ ಅಪಾರವಾದ ವ್ಯತ್ಯಾಸ ಇತ್ತು. ಏಕೆಂದರೆ ಜ್ಞಾನವನ್ನು ಅನುಭವದಿಂದಲೇ ಪಡೆಯಬೇಕಾಗಿತ್ತು. ಜೊತೆಗೆ ಜ್ಞಾನವು ಒಂದೇ ತೆರನಾಗಿತ್ತು.
ಸಾವಿರಾರು ವರ್ಷಗಳವರೆಗೆ ಅದರಲ್ಲಿ ಯಾವ ಬದಲಾವಣೆಯೂ ಆಗಿರಲಿಲ್ಲ. ಆದರೆ ಇಂದಿನ ನೂರು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇಂದು ಶಿಕ್ಷಕ- ವಿದ್ಯಾರ್ಥಿ ನಡುವಿನ ಅಂತರ ಕೇವಲ ತರಗತಿಯ ಅವಧಿಯಾದ 45 ನಿಮಿಷಕ್ಕೆ ಬಂದು ನಿಂತಿದೆ. ಈ ನಿಟ್ಟಿನಲ್ಲಿ, ತಾನು ಬೋಧಿಸುವ ವಿಷಯವನ್ನು, ವಿದ್ಯಾರ್ಥಿಗಳನ್ನು ಹಾಗೂ ವೃತ್ತಿಯನ್ನು ಪ್ರೀತಿಸುವುದು ಶಿಕ್ಷಕರಿಗೆ ಇರಬೇಕಾದ ಅರ್ಹತೆ ಎಂಬ ರಾಧಾಕೃಷ್ಣನ್ ಅವರ ಮಾತುಗಳು ಅರ್ಥಗರ್ಭಿತವಾಗಿವೆ.
ಕನ್ಪ್ಯೂಷಿಯಸ್ ಹೇಳುವಂತೆ, ದೇಶದ ನರ ನಾಡಿಗಳನ್ನು ಶಾಲಾ ಕೊಠಡಿಯಲ್ಲಿ ಸಿದ್ಧಗೊಳಿಸುವಾಗ ಶಿಕ್ಷಕ ಮಾದರಿಯಾಗಿ ಇರಲೇಬೇಕು. ಶಿಕ್ಷಕರು ಪ್ರತಿ ಕ್ಷೇತ್ರಕ್ಕೂ ಕೊಡುಗೆ ನೀಡದಿದ್ದರೂ ಎಲ್ಲ ಕ್ಷೇತ್ರಗಳ ಉತ್ತಮರನ್ನು ಹುಟ್ಟು ಹಾಕುವ ಶಕ್ತಿ ಅವರಲ್ಲಿ ಇರುವುದರಿಂದ ಸಮಾಜ ಅವರನ್ನು ಗೌರವಿಸಲೇಬೇಕು.
ಶಿಕ್ಷಕ ತನಗೆ ಗೌರವ ಸಿಗಬೇಕೆಂದು ಬಯಸುವುದಾದರೆ ಆ ಗೌರವಕ್ಕೆ ಆತ ಅರ್ಹನಾಗಿರಬೇಕು ಎಂದು ಅರವಿಂದ ಘೋಷ್ ಹೇಳಿದ್ದಾರೆ. ಇದನ್ನು ಕೆಲವೊಮ್ಮೆ ವಾಸ್ತವ ಬದುಕಿನಲ್ಲೂ ಕಾಣುತ್ತೇವೆ. ಬಿಜಾಪುರದ ಇಂಡಿ ಮಾರ್ಗದಲ್ಲಿ ಬರುವ ಅಥರ್ಗಾ ಗ್ರಾಮದಲ್ಲಿ ಶ್ರೀ ರೇವಣಸಿದ್ಧಪ್ಪ ಮಾಸ್ತರರಿಗೆ ದೇವಾಲಯವನ್ನು ನಿರ್ಮಿಸಿ ಪ್ರತಿ ದಿನ ಪೂಜೆ ಸಲ್ಲಿಸಲಾಗುತ್ತದೆ. ಪಲ್ಲಕ್ಕಿ ಉತ್ಸವ, ಜಾತ್ರೆ, ಮಾದರಿ ಗ್ರಂಥಾಲಯವನ್ನು ನಡೆಸುತ್ತಿರುವುದು, ಜೊತೆಗೆ ಬಳ್ಳಾರಿಯ ಶ್ರೀ ಎಚ್.ಎಂ.ಕೊಟ್ರಬಸಯ್ಯ ಎಂಬ ಶಿಕ್ಷಕರ ಹೆಸರಿನಲ್ಲಿ ರಂಗವೇದಿಕೆಯನ್ನು ನಿರ್ಮಿಸಿರುವಂತಹ ಅನೇಕ ಉದಾಹರಣೆಗಳು ಶಿಕ್ಷಕರಿಗೆ ನಮ್ಮ ಸಮಾಜ ನೀಡುವ ಗೌರವವನ್ನು ಸೂಚಿಸುತ್ತವೆ.
ಶ್ರೇಷ್ಠ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸಬೇಕಾದ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇದಕ್ಕೆ ಪೂರಕವಾಗಿ ಇಂದು ಮಾನವ ಸಂಪನ್ಮೂಲದ ವಿಪುಲ ವಿಕಾಸಕ್ಕೆ ಎಲ್ಲೆಡೆ ಚಿಂತನೆ, ಯೋಜನೆ ನಡೆಯುತ್ತಿರುವುದನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಬೇಕು. ಏಕೆಂದರೆ ನಿರ್ಜೀವ ಕಡತಗಳೊಂದಿಗೆ ವ್ಯವಹರಿಸಿ, ಬಹುಬೇಗ ವಿಲೇವಾರಿ ಮಾಡಿ ಭೇಷ್ ಎನ್ನಿಸಿಕೊಳ್ಳುವುದು ಸುಲಭ. ಆದರೆ ಜೀವಂತ ಮಕ್ಕಳ ಬದುಕನ್ನು ಕಟ್ಟುವ, ಆ ಮೂಲಕ ನೆಮ್ಮದಿಯ ನಾಳೆಗಳನ್ನು ಹೊಂದಲು ಬೇಕಾದುದನ್ನು ಸೃಷ್ಟಿಸುವ ದೊಡ್ಡ ಆಶಯ ಶಿಕ್ಷಕರನ್ನು ಅವಲಂಬಿಸಿದೆ.
ಶಿಕ್ಷಕರು ಇಂದಿನ ವಿದ್ಯಮಾನಗಳಿಗೆ ತಕ್ಕಂತೆ ನವೀಕರಣಗೊಂಡು, ಸಮರ್ಪಕವಾದ ಹೊಸ ಪರಿಕಲ್ಪನೆಗಳನ್ನು ಅಳವಡಿಸಿಕೊಂಡರೆ ಸಹಜವಾಗಿಯೇ ಸಮಾಜದಲ್ಲಿ ಅವರ ಮೇಲಿನ ಗೌರವ ಹೆಚ್ಚಾಗುತ್ತದೆ. ಜ್ಞಾನ, ತಂತ್ರಜ್ಞಾನದಲ್ಲಿ ನಾವು ಸಾಕಷ್ಟು ಮುಂದುವರಿದಿದ್ದರೂ ಸಾಮಾಜಿಕ- ನೈತಿಕ ಮೌಲ್ಯಗಳ ಸಾಧನೆಯಲ್ಲಿ ಹಿಂದೆ ಬಿದ್ದಿದ್ದೇವೆ. ಇದಕ್ಕೆ ಮಾಧ್ಯಮಗಳಲ್ಲಿ ಬರುತ್ತಿರುವ ವಿವಿಧ ಘಟನೆಗಳೇ ಸಾಕ್ಷಿ.
ಶಿಕ್ಷಕ ವೃತ್ತಿಯ ಘನತೆಯನ್ನು ಅರಿಯುವಲ್ಲಿ ಇಂದಿನ ಸಮಾಜ ವಿಫಲವಾಗಿರುವುದು ಈ ಕ್ಷೇತ್ರದ ಅಪಮೌಲ್ಯಕ್ಕೆ ಕಾರಣವಾಗಿದೆ. ನಾವು ಅಕ್ಷರಸ್ಥರಾದರಷ್ಟೇ ಸಾಲದು, ವಿದ್ಯಾವಂತರಾಗಬೇಕಿದೆ. ಅದಕ್ಕಾಗಿ, ಶಾಲೆಗೆ ಬರುವ ಮಕ್ಕಳನ್ನು ಅರಳುವ ಮೊಗ್ಗುಗಳಾಗಿ ಬದಲಾಯಿಸಬೇಕಾದ ಬಹು ದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲಿದೆ.
ಒಬ್ಬ ತಂದೆ 100 ಶಿಕ್ಷಕರಿಗೆ ಸಮಾನ. ಒಬ್ಬ ತಾಯಿ 1000 ಶಿಕ್ಷಕರಿಗೆ ಸಮಾನ. ಹಾಗಾಗಿ ಒಬ್ಬ ಶಿಕ್ಷಕ ತಂದೆ, ತಾಯಿ ಮತ್ತು ಗುರುವಾಗಿ, ಅಂದರೆ 1101 (100+1000+1) ಶಿಕ್ಷಕರಿಗೆ ಸಮನಾಗಿ ಕಾಯಕದಲ್ಲಿ ತೊಡಗಿಕೊಳ್ಳಬೇಕು. ಈ ಉದ್ಯೋಗಕ್ಕೆ ಸೇರುವಾಗ ಮನೋಭಿಲಾಷೆ ಒಂದಿದ್ದರೆ ಸಾಲದು, ಪ್ರೀತಿಯೂ ಇರಬೇಕು. ಮುಖ್ಯವಾಗಿ ತಾನೊಬ್ಬ ಜೀವಂತ ಶಿಲ್ಪವನ್ನು ನಿರ್ಮಿಸುತ್ತಿರುವ ಅಪರೂಪದ ರೂವಾರಿ ಎಂಬುದನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಅದೇ ರಾಧಾಕೃಷ್ಣನ್ ಅವರಿಗೆ ಶಿಕ್ಷಕ ವೃಂದ ನೀಡಬಹುದಾದ ಬಹು ದೊಡ್ಡ ಉಡುಗೊರೆ.
ಅರಿಯಲಾರದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದಷ್ಟೇ ಶಿಕ್ಷಣವಲ್ಲ. ತಮ್ಮ ತಪ್ಪು ವರ್ತನೆಗಳನ್ನು ತ್ಯಜಿಸಿ ಸಮಾಜದಲ್ಲಿ ಯಾವ ರೀತಿ ಬದುಕಬೇಕು ಎಂಬುದನ್ನು ಕಲಿಸಿಕೊಡುವುದು ನಿಜವಾದ ಶಿಕ್ಷಣ.
-ಮಹಾತ್ಮ ಗಾಂಧಿ.
-ಮಹಾತ್ಮ ಗಾಂಧಿ.
ಅನಕ್ಷರಸ್ಥರ ನಾಡಿನಲ್ಲಿ ಪ್ರಜಾಪ್ರಭುತ್ವ ಕೇವಲ ಒಂದು ಅಣಕವಾಗಿ ಅವಹೇಳನಕ್ಕೆ ಒಳಪಡುತ್ತದೆ.
-ಬರ್ಟಂಡ್ ರಸೆಲ್.
-ಬರ್ಟಂಡ್ ರಸೆಲ್.
Saturday, August 24, 2013
Sunday, August 4, 2013
ಪ್ರಜಾವಾಣಿ ಪತ್ರಿಕೆಲ್ಲಿ (5/8/13)ರಾಜ್ಯ ಗಣಿತ & ವಿಜ್ಞಾನ ಒಲಂಪಿಯಾಡ್ ಕುರಿತ ಲೇಖನ
ರಾಜ್ಯ ಒಲಂಪಿಯಾಡ್ ಸಿದ್ಧರಾಗೋಣ
ಮಕ್ಕಳಿಗೆ ಗಣಿತ- ವಿಜ್ಞಾನ ವಿಷಯಗಳು ಹೆಚ್ಚು ಪ್ರಿಯವಾಗಬೇಕು ಎಂಬ ಅಭಿಲಾಷೆ ನಿನ್ನೆ ಮೊನ್ನೆಯದಲ್ಲ. ಅದಕ್ಕಾಗಿ ಸರ್ಕಾರ, ಶಿಕ್ಷಣ ಇಲಾಖೆ, ಸಂಘ- ಸಂಸ್ಥೆಗಳು, ತಜ್ಞರು ಹಾಗೂ ಶಿಕ್ಷಕರು ಹೊಸ ಹೊಸ ಪ್ರಯೋಗಗಳಿಗೆ ಕೈ ಹಾಕುತ್ತಲೇ ಇರುತ್ತಾರೆ. ಕ್ಲಿಷ್ಟ ಅಂಶಗಳನ್ನು ಸರಳವಾಗಿ ಮನನ ಮಾಡಿಸಲು ಮತ್ತು ಪ್ರಾತ್ಯಕ್ಷಿಕೆ ಒದಗಿಸಲು ವಿಜ್ಞಾನ- ಗಣಿತ ಪ್ರಯೋಗಾಲಯಗಳು, ಮೇಳಗಳು, ಮಾದರಿ ವಸ್ತು ಪ್ರದರ್ಶನಗಳು, ಗೋಷ್ಠಿಗಳು, ಎಜುಸ್ಯಾಟ್ ಪಾಠ... ಹೀಗೆ ಹತ್ತಾರು ವಿನೂತನ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಲೇ ಇವೆ.
ಈ ಪ್ರಯತ್ನಗಳ ನಡುವೆಯೂ ಅನೇಕ ಮಕ್ಕಳಿಗೆ ಇಂದಿಗೂ ಗಣಿತ- ವಿಜ್ಞಾನ ಕಬ್ಬಿಣದ ಕಡಲೆ. ಈ ವಿಷಯಗಳನ್ನು ಇತರ ಸಾಮಾನ್ಯ ವಿಷಯಗಳಂತೆ ಅವರು ಪರಿಗಣಿಸುತ್ತಿಲ್ಲ. ಅದಕ್ಕೆ ಪ್ರಮುಖವಾದ ಕಾರಣವೆಂದರೆ, ದಿನನಿತ್ಯ ತಮ್ಮ ಪರಿಸರದಲ್ಲಿ, ಶಾಲೆಯಲ್ಲಿ, ಮನೆಯಲ್ಲಿ ಎಲ್ಲೆಡೆ ನಡೆಯುವ ಚಟುವಟಿಕೆಗಳ ಹಿಂದಿರುವ ಗಣಿತ- ವಿಜ್ಞಾನದ ರಹಸ್ಯಗಳು ಮಕ್ಕಳಿಗೆ ಸರಿಯಾಗಿ ಮನನವಾಗುತ್ತಿಲ್ಲ. ಇದರಿಂದಾಗಿ ಈ ವಿಷಯಗಳು ಮಕ್ಕಳಿಗೆ, ಅದರಲ್ಲೂ ಪ್ರಾಥಮಿಕ- ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಸಕ್ತಿಯ ವಿಷಯಗಳಾಗುತ್ತಿಲ್ಲ. ಈ ಬೆಳವಣಿಗೆಯಿಂದ ದೇಶದಲ್ಲಿ ಗಣಿತ- ವಿಜ್ಞಾನ ಪದವೀಧರರು ಹಾಗೂ ವಿಜ್ಞಾನಿಗಳ ಸಂಖ್ಯೆ ಕಡಿಮೆಯಾಗುತ್ತಿದೆ.
ರಾಜ್ಯ ಶಿಕ್ಷಣ ಇಲಾಖೆ ಇಂತಹ ಅನೇಕ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಅದಕ್ಕಾಗಿ ಈ ವರ್ಷದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಗಣಿತ ಮತ್ತು ವಿಜ್ಞಾನ ಒಲಂಪಿಯಾಡ್ ಪರೀಕ್ಷೆ ಆಯೋಜಿಸುತ್ತಿದೆ.
ಏನಿದು ಒಲಂಪಿಯಾಡ್?
ನಮ್ಮ ಮಕ್ಕಳಲ್ಲಿ ಅನೇಕ ಬಗೆಯ ಪ್ರತಿಭೆ ಇರುತ್ತದೆ. ಸರಿಯಾದ ಪ್ರೋತ್ಸಾಹ ಸಿಗದೆ ಅಂತಹ ಬಹುತೇಕ ಪ್ರತಿಭೆಗಳು ಕಮರಿ ಹೋಗುತ್ತವೆ. ಅದರಲ್ಲೂ ವಿಜ್ಞಾನ- ಗಣಿತ ವಿಷಯಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಹಾಗಾಗಿ ಈ ವಿಷಯಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೇರಣೆ ನೀಡುವುದು ಈ ಒಲಂಪಿಯಾಡ್ನ ಪ್ರಮುಖ ಉದ್ದೇಶ. ಅದಕ್ಕಾಗಿ ಈ ವರ್ಷ 6 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕನ್ನಡ- ಇಂಗ್ಲಿಷ್ ಎರಡೂ ಮಾಧ್ಯಮಗಳ ಮಕ್ಕಳು ಭಾಗವಹಿಸಬಹುದು. ಪ್ರಶ್ನೆ ಪತ್ರಿಕೆ ಕನ್ನಡ ಮಾಧ್ಯಮದಲ್ಲಿ ಇರಲಿದೆ.
ನಮ್ಮ ಮಕ್ಕಳಲ್ಲಿ ಅನೇಕ ಬಗೆಯ ಪ್ರತಿಭೆ ಇರುತ್ತದೆ. ಸರಿಯಾದ ಪ್ರೋತ್ಸಾಹ ಸಿಗದೆ ಅಂತಹ ಬಹುತೇಕ ಪ್ರತಿಭೆಗಳು ಕಮರಿ ಹೋಗುತ್ತವೆ. ಅದರಲ್ಲೂ ವಿಜ್ಞಾನ- ಗಣಿತ ವಿಷಯಕ್ಕೆ ಇದು ಹೆಚ್ಚು ಅನ್ವಯಿಸುತ್ತದೆ. ಹಾಗಾಗಿ ಈ ವಿಷಯಗಳಲ್ಲಿ ಸರ್ಕಾರಿ ಶಾಲೆಗಳಲ್ಲಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪ್ರೇರಣೆ ನೀಡುವುದು ಈ ಒಲಂಪಿಯಾಡ್ನ ಪ್ರಮುಖ ಉದ್ದೇಶ. ಅದಕ್ಕಾಗಿ ಈ ವರ್ಷ 6 ಮತ್ತು 9ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳೆಲ್ಲರೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಕನ್ನಡ- ಇಂಗ್ಲಿಷ್ ಎರಡೂ ಮಾಧ್ಯಮಗಳ ಮಕ್ಕಳು ಭಾಗವಹಿಸಬಹುದು. ಪ್ರಶ್ನೆ ಪತ್ರಿಕೆ ಕನ್ನಡ ಮಾಧ್ಯಮದಲ್ಲಿ ಇರಲಿದೆ.
ಸ್ಪರ್ಧೆಯ ಹಂತ
ಶಾಲೆ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ನಾಲ್ಕು ಬಗೆಗಳಲ್ಲಿ ಈ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ.
ಶಾಲೆ, ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ನಾಲ್ಕು ಬಗೆಗಳಲ್ಲಿ ಈ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ.
ಶಾಲಾ ಹಂತದಲ್ಲಿ ಆಯಾ ಶಾಲೆಯ 6 ಮತ್ತು 9ನೇ ತರಗತಿಯ ಎಲ್ಲ ಮಕ್ಕಳೂ ಪರೀಕ್ಷೆಯಲ್ಲಿ ಭಾಗವಹಿಸಬಹುದು. ರಾಜ್ಯದಾದ್ಯಂತ ಆಗಸ್ಟ್ 31ರಂದು ಏಕಕಾಲಕ್ಕೆ ಶಾಲಾ ಹಂತದ ಪರೀಕ್ಷೆ ನಡೆಯಲಿದೆ. ಉತ್ತರ ಪತ್ರಿಕೆಗಳನ್ನು ಶಾಲಾ ಹಂತದಲ್ಲೇ ಮೌಲ್ಯಮಾಪನ ಮಾಡಿ ಸೆಪ್ಟೆಂಬರ್ 4ರೊಳಗೆ ಫಲಿತಾಂಶ ಪ್ರಕಟಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಶೇ 5ರಷ್ಟು ಮಕ್ಕಳು ತಾಲ್ಲೂಕು ಹಂತಕ್ಕೆ ಅರ್ಹರಾಗುತ್ತಾರೆ. ಶಾಲಾ ಹಂತದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೆ ಶಾಲೆಯವರೇ ವಿಶ್ವೇಶ್ವರಯ್ಯನವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಪ್ರಮಾಣಪತ್ರ ವಿತರಣೆ ಮಾಡುತ್ತಾರೆ. ತಾಲ್ಲೂಕು ಹಂತದಲ್ಲಿ ಎಲ್ಲ ಶಾಲೆಗಳಿಂದ ಹೆಚ್ಚು ಅಂಕ ಗಳಿಸಿ ಆಯ್ಕೆಯಾದ ಮಕ್ಕಳಿಗೆ ಸೆಪ್ಟೆಂಬರ್ 21ರಂದು ರಾಜ್ಯದೆಲ್ಲೆಡೆ ಒಂದೇ ಸಮಯಕ್ಕೆ ಪರೀಕ್ಷೆ ನಡೆಯಲಿದೆ. ಈ ಫಲಿತಾಂಶವನ್ನು ಸೆ. 25ರಂದು ಇಲಾಖೆಯ ವೆಬ್ಸೈಟ್ನಲ್ಲಿ (http://www.schooleducation.kar.nic.in) ಪ್ರಕಟಿಸಲಾಗುತ್ತದೆ. ಈ ಹಂತದಲ್ಲಿ ಉನ್ನತ ಸ್ಥಾನ ಪಡೆದ ಶೇ 5ರಷ್ಟು ಮಕ್ಕಳು ಜಿಲ್ಲಾ ಹಂತಕ್ಕೆ ಪ್ರವೇಶ ಪಡೆಯುತ್ತಾರೆ. ಬ್ಲಾಕ್ ಹಂತದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಆಯಾ ಶಾಲೆಗಳಲ್ಲಿ ಗಾಂಧಿ ಜಯಂತಿಯಂದು ಶಿಕ್ಷಣ ಇಲಾಖೆ ವತಿಯಿಂದ ಪ್ರಮಾಣಪತ್ರ ವಿತರಿಸಲಾಗುತ್ತದೆ.
ಪ್ರತಿ ತಾಲ್ಲೂಕಿನಿಂದ ಆಯ್ಕೆಯಾದ ಮಕ್ಕಳಿಗೆ ನವೆಂಬರ್ 8ರಂದು ಎಲ್ಲ ಜಿಲ್ಲೆಗಳಲ್ಲಿ ಒಂದೇ ಬಾರಿಗೆ ಜಿಲ್ಲಾ ಹಂತದ ಪರೀಕ್ಷೆ ನಡೆಯುತ್ತದೆ. ಇದರ ಫಲಿತಾಂಶ ನವೆಂಬರ್ 13ರಂದು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟವಾಗಲಿದೆ. ಅತಿ ಹೆಚ್ಚು ಅಂಕ ಪಡೆದ ಶೇ 10ರಷ್ಟು ಮಕ್ಕಳು ಅಂತಿಮ ಹಂತವಾದ ರಾಜ್ಯ ಹಂತಕ್ಕೆ ಅರ್ಹರಾಗುತ್ತಾರೆ. ಜಿಲ್ಲಾ ಹಂತದಲ್ಲಿ ಪ್ರತಿ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ಒಬ್ಬರಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ (ಜನವರಿ 26) ನೀಡಲಾಗುತ್ತದೆ. ಭಾಗವಹಿಸಿದ ಎಲ್ಲ ಮಕ್ಕಳಿಗೂ ಬ್ಲಾಕ್ ಹಂತದ ಕಲಿಕೋತ್ಸವ ದಿನದಂದು ಪ್ರಮಾಣಪತ್ರ ವಿತರಿಸಲಾಗುತ್ತದೆ.
ರಾಜ್ಯ ಹಂತದ ಪರೀಕ್ಷೆಗೆ ಆಯ್ಕೆಯಾದ ಮಕ್ಕಳಿಗೆ ವಿಭಾಗೀಯ ಮಟ್ಟದಲ್ಲಿ ಡಿಸೆಂಬರ್ 13ರಂದು ಪರೀಕ್ಷೆ ನಡೆದು, 20ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಪರೀಕ್ಷೆಯ ಗಣಿತ- ವಿಜ್ಞಾನದ ವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನದ ಜೊತೆಗೆ ಆ ಶಾಲೆಗೆ ರೋಲಿಂಗ್ ಶೀಲ್ಡ್ನ್ನು ಮುಂಬರುವ ಗಣರಾಜ್ಯೋತ್ಸವದಂದು ವಿತರಿಸಲಾಗುತ್ತದೆ.
ಪಠ್ಯವಸ್ತು ಮತ್ತು ಪ್ರಶ್ನೆಪತ್ರಿಕೆ
ರಾಜ್ಯ ಹಂತದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ರಚಿಸಲಾಗುವ ಸಮಿತಿಯು ಒಲಂಪಿಯಾಡ್ ಪರೀಕ್ಷೆಗೆ ಪಠ್ಯ ವಸ್ತುವನ್ನು ನಿಗದಿಪಡಿಸಲಿದೆ. ಸಾಮಾನ್ಯವಾಗಿ 6ನೇ ತರಗತಿಗೆ 1ರಿಂದ 5ನೇ ತರಗತಿ ಪಠ್ಯವಸ್ತು, 9ನೇ ತರಗತಿಗೆ 8ನೇ ತರಗತಿವರೆಗಿನ ಪಠ್ಯವಸ್ತುವನ್ನು ಪರಿಗಣಿಸಬಹುದು. ಶಾಲಾ ಹಂತದ ಪರೀಕ್ಷೆಗೆ ಆಯಾ ಶಾಲಾ ಶಿಕ್ಷಕರೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸಮಿತಿಯು ಜುಲೈ 31ರೊಳಗೆ ಪಠ್ಯವಸ್ತು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸುತ್ತದೆ. ರಾಜ್ಯ ಹಂತದ ಸಮಿತಿಯು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ, ಪಬ್ಲಿಕ್ ಪರೀಕ್ಷೆ ಮಾದರಿಯಲ್ಲೇ ಪರೀಕ್ಷೆ ನಡೆಸುತ್ತದೆ.
ರಾಜ್ಯ ಹಂತದಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ರಚಿಸಲಾಗುವ ಸಮಿತಿಯು ಒಲಂಪಿಯಾಡ್ ಪರೀಕ್ಷೆಗೆ ಪಠ್ಯ ವಸ್ತುವನ್ನು ನಿಗದಿಪಡಿಸಲಿದೆ. ಸಾಮಾನ್ಯವಾಗಿ 6ನೇ ತರಗತಿಗೆ 1ರಿಂದ 5ನೇ ತರಗತಿ ಪಠ್ಯವಸ್ತು, 9ನೇ ತರಗತಿಗೆ 8ನೇ ತರಗತಿವರೆಗಿನ ಪಠ್ಯವಸ್ತುವನ್ನು ಪರಿಗಣಿಸಬಹುದು. ಶಾಲಾ ಹಂತದ ಪರೀಕ್ಷೆಗೆ ಆಯಾ ಶಾಲಾ ಶಿಕ್ಷಕರೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧ ಪಡಿಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ರಾಜ್ಯ ಸಮಿತಿಯು ಜುಲೈ 31ರೊಳಗೆ ಪಠ್ಯವಸ್ತು ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸುತ್ತದೆ. ರಾಜ್ಯ ಹಂತದ ಸಮಿತಿಯು ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಹಂತದ ಪ್ರಶ್ನೆ ಪತ್ರಿಕೆಗಳನ್ನು ರೂಪಿಸಿ, ಪಬ್ಲಿಕ್ ಪರೀಕ್ಷೆ ಮಾದರಿಯಲ್ಲೇ ಪರೀಕ್ಷೆ ನಡೆಸುತ್ತದೆ.
ಪ್ರಶ್ನೆ ಪತ್ರಿಕೆಯಲ್ಲಿ ಪ್ರತಿ ವಿಷಯಕ್ಕೆ 50 ಪ್ರಶ್ನೆಗಳು ಇರುತ್ತವೆ. 50 ಅಂಕಗಳ ವಸ್ತುನಿಷ್ಠ ಬಹು ಆಯ್ಕೆಯ ಉತ್ತರಗಳನ್ನು ನೀಡಲಾಗುತ್ತದೆ. ಅದರಲ್ಲಿ `ಪೂರ್ಣಗೊಳಿಸಿ' `ಉತ್ತರ ಆಯ್ಕೆ ಮಾಡಿ' `ಹೊಂದಿಸಿ ಬರೆಯಿರಿ' `ಹೋಲಿಕೆ ಮಾಡಿ' `ಗುಂಪಿಗೆ ಸೇರದ ಪದ' ಇತ್ಯಾದಿ ವಿಧಗಳು ಇರುತ್ತವೆ. ಪ್ರತಿ ಪ್ರಶ್ನೆಗೆ ಒಂದು ಅಂಕ ಇದ್ದು, ಪ್ರತಿ ವಿಷಯದ ಪರೀಕ್ಷೆಗೆ ಒಂದು ಗಂಟೆ ಸಮಯ ನಿಗದಿಪಡಿಸಲಾಗಿದೆ. ಬ್ಲಾಕ್ ಹಂತದಿಂದ ಉತ್ತರ ಪತ್ರಿಕೆಗೆ ಒ.ಎಂ.ಆರ್. ಶೀಟ್ ಬಳಸಲಾಗುತ್ತಿದ್ದು, ಅದರ ಬಗ್ಗೆ ಮಕ್ಕಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗುತ್ತದೆ.
ಮಕ್ಕಳೇ, ಈ ಸುಂದರ ಅವಕಾಶವನ್ನು ತಪ್ಪದೇ ಬಳಸಿಕೊಳ್ಳುತ್ತೀರಿ ತಾನೇ? ಹಾಗಾದರೆ ತಡವೇಕೆ? ಒಲಂಪಿಯಾಡ್ಗೆ ಸಿದ್ಧರಾಗೋಣ ಬನ್ನಿ.
ಹೆಚ್ಚಿನ ಮಾಹಿತಿಗೆ ಹತ್ತಿರದ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಅಥವಾ http://ssakarnataka.gov.in/ ಅಥವಾhttp://www.schooleducation.kar.nic.in/
ಇತರ ಒಲಂಪಿಯಾಡ್
1959ರಲ್ಲಿ ರೊಮೇನಿಯಾದಲ್ಲಿ ಆರಂಭವಾಗಿರುವ, ಪ್ರತಿ ವರ್ಷ ಜುಲೈನಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಏರ್ಪಡಿಸಲಾಗುತ್ತಿರುವ ಅಂತರ ರಾಷ್ಟ್ರೀಯ ಗಣಿತ ಒಲಂಪಿಯಾಡ್ನಲ್ಲಿ ನೂರಕ್ಕೂ ಹೆಚ್ಚು ದೇಶಗಳ ಗಣಿತ ಉತ್ಸಾಹಿಗಳು ಪಾಲ್ಗೊಳ್ಳುತ್ತಿದ್ದಾರೆ. ಭಾರತದ ರಾಷ್ಟ್ರೀಯ ಗಣಿತ ಒಲಂಪಿಯಾಡ್ ಸ್ಪರ್ಧೆಗಳು 1986ರಿಂದ ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ಏರ್ಪಾಡಾಗುತ್ತಿವೆ. ವಿವರಗಳಿಗೆ www.imo-official.org ಅಥವಾhttp://en.wikipedia.org/wiki/indian_national_mathematical_olympiad ಸಂಪರ್ಕಿಸಬಹುದು. ರಾಷ್ಟ್ರೀಯ ವಿಜ್ಞಾನ ಒಲಂಪಿಯಾಡ್ನ್ನು 3ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ನಡೆಸಲಾಗುತ್ತದೆ. ಪ್ರಥಮ ಹಂತದಲ್ಲಿ ಶಾಲೆಯಲ್ಲಿ ನಡೆಸಲಾಗುತ್ತದೆ. ಕನಿಷ್ಠ 50 ಮಕ್ಕಳು ನೋಂದಾಯಿಸಿಕೊಳ್ಳಬೇಕು. ನೋಂದಣಿಗಳನ್ನು ಶಾಲೆಗಳ ಮೂಲಕ ನಿಗದಿತ ಅರ್ಜಿ ನಮೂನೆಯಲ್ಲಿ ಕಳುಹಿಸಬೇಕಾಗುತ್ತದೆ. ಇದಕ್ಕೆ ಪೂರಕವಾದ ಮಾಹಿತಿ ಕೈಪಿಡಿ ಅಂತರ್ಜಾಲದಲ್ಲಿ ದೊರೆಯುತ್ತದೆ. ಗಮನಿಸಿ http://www.sofworld.org/html2003/htp.shtml.
1959ರಲ್ಲಿ ರೊಮೇನಿಯಾದಲ್ಲಿ ಆರಂಭವಾಗಿರುವ, ಪ್ರತಿ ವರ್ಷ ಜುಲೈನಲ್ಲಿ ಬೇರೆ ಬೇರೆ ರಾಷ್ಟ್ರಗಳಲ್ಲಿ ಏರ್ಪಡಿಸಲಾಗುತ್ತಿರುವ ಅಂತರ ರಾಷ್ಟ್ರೀಯ ಗಣಿತ ಒಲಂಪಿಯಾಡ್ನಲ್ಲಿ ನೂರಕ್ಕೂ ಹೆಚ್ಚು ದೇಶಗಳ ಗಣಿತ ಉತ್ಸಾಹಿಗಳು ಪಾಲ್ಗೊಳ್ಳುತ್ತಿದ್ದಾರೆ. ಭಾರತದ ರಾಷ್ಟ್ರೀಯ ಗಣಿತ ಒಲಂಪಿಯಾಡ್ ಸ್ಪರ್ಧೆಗಳು 1986ರಿಂದ ಪ್ರಾದೇಶಿಕ ಮತ್ತು ರಾಷ್ಟ್ರ ಮಟ್ಟದಲ್ಲಿ ಏರ್ಪಾಡಾಗುತ್ತಿವೆ. ವಿವರಗಳಿಗೆ www.imo-official.org ಅಥವಾhttp://en.wikipedia.org/wiki/indian_national_mathematical_olympiad ಸಂಪರ್ಕಿಸಬಹುದು. ರಾಷ್ಟ್ರೀಯ ವಿಜ್ಞಾನ ಒಲಂಪಿಯಾಡ್ನ್ನು 3ರಿಂದ 12ನೇ ತರಗತಿವರೆಗಿನ ಮಕ್ಕಳಿಗೆ ನಡೆಸಲಾಗುತ್ತದೆ. ಪ್ರಥಮ ಹಂತದಲ್ಲಿ ಶಾಲೆಯಲ್ಲಿ ನಡೆಸಲಾಗುತ್ತದೆ. ಕನಿಷ್ಠ 50 ಮಕ್ಕಳು ನೋಂದಾಯಿಸಿಕೊಳ್ಳಬೇಕು. ನೋಂದಣಿಗಳನ್ನು ಶಾಲೆಗಳ ಮೂಲಕ ನಿಗದಿತ ಅರ್ಜಿ ನಮೂನೆಯಲ್ಲಿ ಕಳುಹಿಸಬೇಕಾಗುತ್ತದೆ. ಇದಕ್ಕೆ ಪೂರಕವಾದ ಮಾಹಿತಿ ಕೈಪಿಡಿ ಅಂತರ್ಜಾಲದಲ್ಲಿ ದೊರೆಯುತ್ತದೆ. ಗಮನಿಸಿ http://www.sofworld.org/html2003/htp.shtml.
ಪರೀಕ್ಷೆ ವೇಳಾಪಟ್ಟಿ
ವಿಜ್ಞಾನ (ಸಮಯ) ಬೆಳಿಗ್ಗೆ 10ರಿಂದ 11
ಗಣಿತ (ಸಮಯ) ಮಧ್ಯಾಹ್ನ 12ರಿಂದ 1
ವಿಜ್ಞಾನ (ಸಮಯ) ಬೆಳಿಗ್ಗೆ 10ರಿಂದ 11
ಗಣಿತ (ಸಮಯ) ಮಧ್ಯಾಹ್ನ 12ರಿಂದ 1
ಶಾಲಾ ಹಂತ
31.8.2013
31.8.2013
ತಾಲ್ಲೂಕು ಹಂತ
21.9.2013
21.9.2013
ಜಿಲ್ಲಾ ಹಂತ
08.11.2013
08.11.2013
ರಾಜ್ಯ ಹಂತ
13.12.2013
13.12.2013
Monday, June 24, 2013
ಎಲ್ಲಿ ಹೋದ್ರು ನಮ್ಮ ಮೇಸ್ಟ್ರು ಲೇಖನ ಈ ದಿನದ (24/6/13)ಪ್ರಜಾವಾಣಿಯ ಶಿಕ್ಷಣ ಪುರವಣಿಯಲ್ಲಿ
ಎಲ್ಲಿ ಹೋದ್ರು? ನಮ್ಮ ಮೇಷ್ಟ್ರು!
- Mon, 06/24/2013 - 01:00
ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಮಕ್ಕಳ ಬದುಕು ಮತ್ತೆ ಹಿಂದಿನಂತೆ ಶಾಲೆ, ಪಾಠ, ಓದು-ಬರಹ, ಟ್ಯೂಷನ್, ಹೋಂವರ್ಕ್ನತ್ತ ವಾಲತೊಡಗಿದೆ. ಆದರೆ ಮಕ್ಕಳ ಭವಿಷ್ಯ ಅರಳಿಸುವ ಶಿಕ್ಷಕರನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಶಿಕ್ಷಕರ ಕುರಿತ ನಮ್ಮ ನಿರ್ಲಕ್ಷ್ಯದಿಂದಾಗಿ, ಅವರ ಸಂಖ್ಯೆ ಹೆಚ್ಚಾದರೂ, ಮಕ್ಕಳಿಗೆ ನಿಜವಾದ ತಂದೆ, ತಾಯಿ, ಗುರುವಾಗಿ ಮಾರ್ಗದರ್ಶನ ನೀಡುವಂಥ ಉತ್ತಮ ಶಿಕ್ಷಕರು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಲೇ ಇದ್ದಾರೆ.
ಒಂದು ಕ್ಷಣ ಕಣ್ಣು ಮುಚ್ಚಿ ನಮ್ಮ ಬಾಲ್ಯದ ಅಥವಾ ಅದಕ್ಕಿಂತ ಹಿಂದಿನ ದಿನಗಳ ಶಿಕ್ಷಕರನ್ನು ನೆನೆಸಿಕೊಂಡರೆ ಮನಸ್ಸು ಪುಳಕಗೊಳ್ಳುತ್ತದೆ. ಅಂದು ಯಾವುದೇ ಸೌಲಭ್ಯಗಳಿಲ್ಲದೆ, ಗುಡಿಗಳಲ್ಲಿ ನಡೆಯುತ್ತಿದ್ದ ಶಾಲೆ, ಸೂಕ್ತ ಸಂಬಳ- ಸೌಕರ್ಯಗಳು ಇಲ್ಲದಿದ್ದರೂ ಗ್ರಾಮದವರು ನೀಡುತ್ತಿದ್ದ ಕಾಳು ಕಡ್ಡಿಗಳಿಂದಲೇ ಸಂತೃಪ್ತರಾಗಿ, ಮಕ್ಕಳ ಬದುಕನ್ನು ಹಸನುಗೊಳಿಸುತ್ತಿದ್ದ ಅಧ್ಯಾಪಕರು, ಗ್ರಾಮದ ಹಿರಿಯರಿಗೂ ಮಾರ್ಗದರ್ಶನ ಮಾಡುತ್ತಿದ್ದರು. ಅವರ ನಡೆ-ನುಡಿ ಒಂದೇ ಆಗಿತ್ತಲ್ಲದೆ ಸ್ವಾರ್ಥಕ್ಕೆ ಆಸೆ ಪಡದೆ, ಪ್ರಚಾರಕ್ಕೆ ಹಂಬಲಿಸದೆ ಬದುಕಿದ ರೀತಿಗೆ ಸರ್ವರೂ ವಿನಮ್ರರಾಗಿ ಅವರಿಗೆ ನೀಡುತ್ತಿದ್ದ ಗೌರವ ಕಣ್ಣಮುಂದೆ ಸಾಗಿ ಹೋಗುತ್ತವೆ.
ಆ ಮೇಷ್ಟ್ರುಗಳು ತಮ್ಮನ್ನು ಸಂಪೂರ್ಣವಾಗಿ ಗ್ರಾಮಕ್ಕೆ ಹಾಗೂ ಮಕ್ಕಳ ಶಿಕ್ಷಣಕ್ಕೆ ಅರ್ಪಿಸಿಕೊಳ್ಳುತ್ತಿದ್ದರು. ಬಡ ಮಕ್ಕಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದರು. ಮಕ್ಕಳ ಸಂಖ್ಯೆ ಹೆಚ್ಚಾದರೆ ಅವರಿಗಾಗಿ ಆಹಾರ- ದಿನಸಿ- ತರಕಾರಿ- ಪೈಸೆಯನ್ನು ಭಿಕ್ಷೆ ಬೇಡಿ ತಂದು ಓದಿಸಿದ ಸಾಕಷ್ಟು ಉದಾಹರಣೆಗಳು ಆತ್ಮಕಥೆಗಳಲ್ಲಿ ದಾಖಲಾಗಿವೆ. ಶಿಕ್ಷಕರು ತಮ್ಮ ವೃತ್ತಿ ಬಗ್ಗೆ ಹೊಂದಿದ್ದ ಅಪಾರ ಗೌರವವೇ ಅವರನ್ನು ಇತರರು ಗೌರವಿಸುವಂತೆ ಇತ್ತು. ಆದರೆ ಇಂದಿನ ಶಿಕ್ಷಕರಿಗೂ ಆ ಮೇಷ್ಟ್ರಿಗೂ ಅಜಗಜಾಂತರ ವ್ಯತ್ಯಾಸ. ಇಂದು ಶಾಲೆಯಲ್ಲಿ ಎಲ್ಲ ರೀತಿಯ ಸೌಕರ್ಯಗಳಿವೆ. ಶಿಕ್ಷಕರಿಗೆ ಉತ್ತಮ ವೇತನ ದೊರೆಯುತ್ತಿದ್ದರೂ ಸಮಾಜದಲ್ಲಿ ಗೌರವ ಕಡಿಮೆಯಾಗುತ್ತಿದೆ. `ಶಿಕ್ಷಕ ಗೌರವ ಸಿಗಬೇಕೆಂದು ಬಯಸುವುದಾದರೆ ಆತ ಗೌರವಕ್ಕೆ ಅರ್ಹನಾಗಿರಬೇಕು' ಎಂಬ ಅರವಿಂದ ಘೋಷ್ ಅವರ ಮಾತು ಇಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ. ಏಕೆಂದರೆ ಇತ್ತೀಚೆಗೆ ರಾಷ್ಟ್ರೀಯ ದಿನಪತ್ರಿಕೆ ಯೊಂದು ಸಮೀಕ್ಷಾ ವರದಿಯನ್ನು ಪ್ರಕಟಿಸಿತು. ಅದರ ಪ್ರಕಾರ, ಪ್ರಸ್ತುತ ಶಿಕ್ಷಕ ವೃತ್ತಿಗೆ ಬಂದಿರುವ ಶೇ 83ರಷ್ಟು ಮಂದಿಗೆ ತಮ್ಮ ಕಾಯಕದ ಬಗ್ಗೆ ಗೌರವವೇ ಇಲ್ಲ ಎಂಬ ಆಘಾತಕಾರಿ ಅಂಶ ಅದರಿಂದ ಹೊರಬಿದ್ದಿದೆ. ಹಾಗಾದರೆ ಇದರ ಪರಿಣಾಮ?
ಅಂದಿನ ಮೇಷ್ಟ್ರುಗಳು ಇಂದಿಗೂ ನಮಗೆ ಮಾದರಿಯಾಗಿದ್ದಾರೆ ಎಂದರೆ ಅದಕ್ಕೆ ಒಂದೆರಡು ಕಾರಣಗಳಿಲ್ಲ. ಅತ್ಯಂತ ಶಿಸ್ತುಬದ್ಧವಾಗಿ ನಡೆಸಿದ ಜೀವನ ಶೈಲಿ, ದಕ್ಷತೆಯಿಂದ ಮಕ್ಕಳಿಗೆ ಕಲಿಸುತ್ತಿದ್ದ ರೀತಿ, ತಮ್ಮ ಧ್ಯೇಯಗಳಿಗೆ ವಿರುದ್ಧವಾಗಿ ಯಾವುದೇ ರಾಜಿಗೆ ಅವಕಾಶ ನೀಡದಿರುವುದು, ಯಾವುದೇ ಹಿನ್ನೆಲೆಯ ಮಗುವಾಗಿದ್ದರೂ ಸಮಾನವಾಗಿ ಕಾಣುತ್ತಿದ್ದ ದೃಷ್ಟಿಕೋನ, ಜೀವನದ ಪ್ರತಿ ನಡೆಯಲ್ಲೂ ಪಾವಿತ್ರ್ಯ ಕಾಪಾಡಿಕೊಳ್ಳುವುದು... ಇಂತಹ ಸೂಕ್ಷ್ಮ ಅಂಶಗಳು ಇದ್ದುದರಿಂದ ಅವರ ಮೇಲೆ ಮಕ್ಕಳಿಗೆ ಸಹಜವಾಗಿಯೇ ಪೂಜ್ಯ ಭಾವನೆ ಇಮ್ಮಡಿಗೊಳ್ಳುತ್ತಿತ್ತು.
ತರಗತಿ ಬೋಧನೆಯಲ್ಲಿ ಅವರು ತೊಡಗಿಕೊಂಡಾಗ ಎಲ್ಲ ವಿಷಯಗಳೂ ಕರತಲಾಮಲಕ ಆಗಿರುತ್ತಿದ್ದವು. ಅದಕ್ಕಾಗಿ ಹೆಚ್ಚಿನ ಕಾಲ ಅಧ್ಯಯನ ಮಾಡುತ್ತಾ ಪೂರ್ವ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಬೋಧನೆ ಯನ್ನು ವಿಶೇಷವಾಗಿ ಪರಿಗಣಿಸುತ್ತಿದ್ದರು. ಸಾಮಾನ್ಯವಾಗಿ ಅವರೆಲ್ಲರಲ್ಲೂ ಇದ್ದ ಬಹು ದೊಡ್ಡ ಹವ್ಯಾಸವೆಂದರೆ ಪುಸ್ತಕಗಳನ್ನು ಓದುವುದು. ಪಠ್ಯಕ್ಕೆ ಪೂರಕ ಹಾಗೂ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಆಸಕ್ತರಾಗಿದ್ದರು. ಅದರಲ್ಲೂ ಹಳಗನ್ನಡ ಪದ್ಯಗಳನ್ನು ಪಟಪಟನೆ ಹೇಳುತ್ತಿದ್ದ ಶೈಲಿ ಇಂದಿಗೂ ನನ್ನ ಮನದಲ್ಲಿ ಮನೆ ಮಾಡಿದೆ. ಹೆಚ್ಚು ಹೆಚ್ಚು ಓದಿಕೊಂಡು ಹೊಸ ಜ್ಞಾನಭಂಡಾರದ ಒಡೆಯರಾಗಿದ್ದರು. ಅದನ್ನು ಸಾಂದರ್ಭಿಕವಾಗಿ ಬೋಧನೆಯಲ್ಲಿ ಬಳಸಿಕೊಂಡು ಮಕ್ಕಳಿಗೂ ಸಾಹಿತ್ಯದ ರುಚಿ ಹತ್ತಿಸುತ್ತಿದ್ದರು. ಓದಿನಿಂದ ಸಿಗುವ ಆನಂದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂಬುದನ್ನು ಮಕ್ಕಳು ಮನಗಾಣುವಂತೆ ಮಾಡುತ್ತಿದ್ದರು. ಈ ತರಹ ನಾನಾ ಮಜಲುಗಳಿಂದ ಮಾಹಿತಿ ಸಂಗ್ರಹಿಸಿ ವಿಷಯಗಳ ಮೇಲೆ ಪ್ರಭುತ್ವ ಪಡೆದು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದ್ದರು.
ಶಾಲಾ ಸಮಯದಲ್ಲಿ ಇತರ ಕೆಲಸ ಮಾಡಲು ಅವರು ಎಂದೂ ಯೋಚಿಸುತ್ತಿರಲಿಲ್ಲ. ಶಾಲಾ ಸಮಯ ಅಮೂಲ್ಯ ಎಂದರಿತು ಅದರ ಗರಿಷ್ಠ ಅನುಕೂಲ ಮಕ್ಕಳಿಗೆ ಸಿಗಲು ಶ್ರಮಿಸುತ್ತಿದ್ದರು. ಶಾಲೆ ತಪ್ಪಿಸುವುದು ಅಥವಾ ಆರ್ಥಿಕ ಲಾಭದ ಕೆಲಸಗಳಿಗೆ ಯಾವತ್ತೂ ಅವರು ಮನಸ್ಸು ಮಾಡಲಿಲ್ಲ. ಪ್ರತಿದಿನ ಹಾಜರಾಗಿ ಬೋಧಿಸಿದಾಗ ಮಾತ್ರ, ಮಗು ಶಾಲೆ ಬಿಡಲು ಮುಂದಾದರೆ ಅದನ್ನು ತಡೆಯುವ ನೈತಿಕ ಹಕ್ಕು ನನಗೆ ಬರುತ್ತದೆ ಎಂಬುದನ್ನು ಅರಿತಿದ್ದರು. ಅದನ್ನು ಅಕ್ಷರಶಃ ಪಾಲಿಸುತ್ತಿದ್ದರು.
ಆದರೆ ಈಗಿನ ಶಿಕ್ಷಕರು ಈ ಎಲ್ಲ ಕೆಲಸಗಳನ್ನೂ ಮಾಡುತ್ತಿಲ್ಲವೇ ಎಂದು ಕೇಳಿದರೆ ಉತ್ತರ ಬಹುತೇಕ `ಇಲ್ಲ' ಎಂದೇ ಆಗಿರುತ್ತದೆ. ಯಾಕೆಂದರೆ ನಮ್ಮ ಶಿಕ್ಷಕರಿಗೆ ಸಮಯವೇ ಸಿಗುತ್ತಿಲ್ಲ. ಅವರು ವಿಪರೀತ ಕೆಲಸದ ಒತ್ತಡದಿಂದ ಕಂಗಾಲಾಗಿದ್ದಾರೆ. ಸರಿಯಾಗಿ ಪಾಠ ಮಾಡಲೂ ಬಿಡುವು ಸಿಗದೆ ಒದ್ದಾಡುತ್ತಿದ್ದಾರೆ. ಪಾಠದ ಹೊರತಾಗಿ ಇತರ ಎಲ್ಲ ಕೆಲಸಗಳನ್ನೂ ಅವರ ತಲೆಗೆ ಕಟ್ಟಲಾಗುತ್ತಿದೆ. ದಾಖಲೆ ನಿರ್ವಹಣೆಯೇ ಅವರ ಪ್ರಮುಖ ಕಾರ್ಯವಾಗಿದೆ. ಸಮಾಜದಲ್ಲಿ ಮೊದಲೇ ವೃತ್ತಿಗೌರವ ಕಡಿಮೆ ಆಗುತ್ತಿರುವಾಗ ಈ ತೆರನಾದ ವ್ಯವಸ್ಥೆಯಿಂದ ಶಿಕ್ಷಕರು ಮತ್ತಷ್ಟು ಕುಗ್ಗಿ ಹೋಗಿದ್ದಾರೆ. ಕೆಲವೇ ಶಿಕ್ಷಕರು ಸಮಯ ಹೊಂದಾಣಿಕೆ ಮಾಡಿಕೊಂಡು, ದಾಖಲೆ ನಿರ್ವಹಣೆ ಜೊತೆಗೆ ಉತ್ತಮ ಬೋಧನಾ ಕಾರ್ಯ ಕೈಗೊಳ್ಳುತ್ತಾ, ಜಡ್ಡುಗಟ್ಟಿದ ವ್ಯವಸ್ಥೆಯನ್ನು ಮೀರಿ ಉತ್ತಮ ಶಿಕ್ಷಕರು ಎನಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ಹಣದ ಹಿಂದೆ ಹೋಗಿ ಶಾಲೆಗಿಂತ ಮನೆ ಪಾಠಕ್ಕೆ ಆದ್ಯತೆ ನೀಡುತ್ತಿರುವುದು ಗುಟ್ಟೇನಲ್ಲ. ಉಳಿದವರು, ನಮಗ್ಯಾಕೆ ಇಲ್ಲದ ಉಸಾಬರಿ ಎಂದು ದಿನ ನೂಕುತ್ತಿದ್ದಾರೆ. ಆ ಶಿಕ್ಷಕರಿಗೆ ಸಾಧ್ಯವಾಗುವುದಾದರೆ ಉಳಿದವರಿಗೇಕೆ ಅಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿಯುತ್ತದೆ.
ಶಿಕ್ಷಕರು ಇಂದು ಬೋಧನೆ- ಕಲಿಕಾ ಪ್ರಕ್ರಿಯೆಗಳಿಗಿಂತ ಬೇರೆ ಚಟುವಟಿಕೆಗಳತ್ತ ಹೆಚ್ಚು ಆಸಕ್ತರಾಗಿದ್ದಾರೆ ಎಂಬ ದೂರಿದೆ. ಇದಕ್ಕೆ ಪ್ರಮುಖ ಕಾರಣ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ತನ್ನ ಕೆನ್ನಾಲಿಗೆ ಚಾಚುತ್ತಿರುವುದು. ಶಿಕ್ಷಕರು ತಮಗೆ ಸಿಗಬೇಕಾದ ಸೌಲಭ್ಯ ಪಡೆಯಲು, ಅದರಲ್ಲೂ ಕೆಲವೆಡೆ ವೇತನಕ್ಕಾಗಿ ಸಾಮಾನ್ಯ ಗುಮಾಸ್ತನಿಂದ ಎಲ್ಲರ ಕೈ ಬೆಚ್ಚಗೆ ಮಾಡಬೇಕು. ಇಲ್ಲದಿದ್ದರೆ ಕೆಲಸ ಆಗುವುದಿಲ್ಲ. ಉನ್ನತ ಹಂತದ ಅಧಿಕಾರಿಗಳಿಗೆ ಇದು ಗೊತ್ತಿದ್ದರೂ ಏನೂ ಮಾಡಲಾರದಂತಹ ಸ್ಥಿತಿ. ಶಿಕ್ಷಕರು ಸಂಬಳದಿಂದಲೇ ತಮ್ಮ ಬದುಕು ಸಾಗಿಸಬೇಕು. ಹಾಗಾಗಿ ಅವರು ಇತರ ಆದಾಯದ ಮೂಲಗಳತ್ತ ಸಾಗುವಂತಾಗಿದೆ. ಇದನ್ನು ಕೆಲ ಶಿಕ್ಷಕರು ಅಸ್ತ್ರವಾಗಿಸಿಕೊಂಡು ತಮ್ಮ ಶಿಕ್ಷಕ ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿ, ಇತರ ಆದಾಯದ ಕೆಲಸಗಳನ್ನೇ ಪ್ರಮುಖವಾಗಿಸಿಕೊಂಡಿದ್ದಾರೆ.
ಇವರೆಲ್ಲರೂ ನಮ್ಮ ಹಿಂದಿನ ದಿನಗಳ ಮೇಷ್ಟ್ರುಗಳನ್ನ ಒಂದು ಕ್ಷಣ ನೆನಪು ಮಾಡಿಕೊಳ್ಳಬೇಕು. ಬಿಜಾಪುರದ ಇಂಡಿ ಮಾರ್ಗದಲ್ಲಿ ಬರುವ ಅಥರ್ಗಾ ಗ್ರಾಮದಲ್ಲಿ `ಶ್ರೀ ರೇವಣಸಿದ್ಧಪ್ಪ ಮಾಸ್ತರ'ರಿಗೆ ದೇವಾಲಯವನ್ನು ನಿರ್ಮಿಸಲಾಗಿದ್ದು, ಪ್ರತಿ ದಿನ ಪೂಜೆ ನಡೆಯುತ್ತದೆ. ಅಲ್ಲದೆ ಪಲ್ಲಕ್ಕಿ ಉತ್ಸವ, ಜಾತ್ರೆ, ಮಾದರಿ ಗ್ರಂಥಾಲಯವನ್ನು ನಡೆಸುತ್ತಿರುವುದು ಈ ರೀತಿ ಉಡಾಫೆಯಾಗಿ ಮಾತನಾಡುವವರಿಗೆ ತಕ್ಕ ಉತ್ತರದಂತಿದೆ.
ಶಿಕ್ಷಕರ ಪ್ರತಿ ನಡೆಯೂ ಬಹು ಮುಖ್ಯ. ಅವರು ತಪ್ಪು ಮಾಡಿದರೆ ಮಕ್ಕಳ ಭವಿಷ್ಯ ಕಮರಲೂ ಬಹುದು. ಪ್ರತಿ ದಿನ ತರಗತಿಯಲ್ಲಿ ನನ್ನ ಮಕ್ಕಳಿಗೆ ನಾನು ನ್ಯಾಯ ಒದಗಿಸುತ್ತಿರುವೆನೇ ಎಂಬ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ನಡೆದ ಹಾದಿಯ ಸರಿ-ತಪ್ಪುಗಳು ಗಮನಕ್ಕೆ ಬಾರದಂತಾಗುತ್ತವೆ. ತಪ್ಪುಗಳನ್ನು ಗುರುತಿಸಿಕೊಂಡು ಸಕಾರಾತ್ಮಕವಾಗಿ ಚಿಂತಿಸಿ ಉತ್ತಮ ಗುರಿಯತ್ತ ಪ್ರಾಮಾಣಿಕವಾಗಿ ಮುನ್ನುಗ್ಗಿದರೆ ಶಿಕ್ಷಕರ ಸ್ಥಾನಮಾನದ ಜೊತೆಗೆ ಬೋಧನೆಯೂ ಉನ್ನತ ಮಟ್ಟಕ್ಕೆ ಏರುತ್ತದೆ. ಇದನ್ನೇ ಮಕ್ಕಳು, ಪೋಷಕರು, ಸಮಾಜ ಅವರಿಂದ ಆಶಿಸುತ್ತಿದೆ.
ರವೀಂದ್ರನಾಥ ಟ್ಯಾಗೋರ್, ಡಾ. ಎಸ್.ರಾಧಾಕೃಷ್ಣನ್, ಡಾ. ಎಚ್. ನರಸಿಂಹಯ್ಯ, ರಾಜರತ್ನಂ, ದ.ರಾ.ಬೇಂದ್ರೆ, ಬಿ.ಎಂ.ಶ್ರೀ, ಟಿ.ಎಸ್. ವೆಂಕಣ್ಣಯ್ಯ, ಪಂಜೆ ಮಂಗೇಶರಾಯ, ಕೃಷ್ಣಮೂರ್ತಿ ಪುರಾಣಿಕ್, ತಮ್ಮಣ್ಣ ಮಾಸ್ತರ್, ಬೆಳಗೆರೆ ಕೃಷ್ಣಶಾಸ್ತ್ರಿ, ಎಂ.ಆರ್.ಎನ್., ಎನ್. ಕಾಳೇಶ್ವರ ರಾವ್, ಡಾ. ಎನ್.ಗಣನಾಥ, ಜಿ.ಎಸ್.ಜಯದೇವ್ ಮುಂತಾದವರೆಲ್ಲರೂ ಮಕ್ಕಳ ಮನಸ್ಸಿನಲ್ಲಿ ಅಳಿಸಲಾಗದ ಛಾಪನ್ನು ಒತ್ತಿದ್ದಾರೆ. ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಮತ್ತು ಕೋಟಿ ಕೊಟ್ಟರೂ ದೊರೆಯುವುದಿಲ್ಲ. ಇವರೆಲ್ಲರೂ ತಮ್ಮ ವಿದ್ಯಾರ್ಥಿಗಳನ್ನು ಪ್ರೀತಿಸಿದರು, ವಿಷಯಗಳನ್ನು ಆರಾಧಿಸಿದರು, ವೃತ್ತಿಯನ್ನು ಎತ್ತರಕ್ಕೆ ಕೊಂಡೊಯ್ದರು. ಹಾಗಾಗಿ ಮಕ್ಕಳ ಬಾಳಿಗೆ ಬೆಳಕಾದರು.
Friday, May 31, 2013
Subscribe to:
Posts (Atom)